ಕೋಟೆ ಮಾರಮ್ಮ ಮೂವೀ ಮೇಕರ್ಸ್ ಲಾಂಛನದಲ್ಲಿ ಶ್ರೀಮತಿ.ಎನ್.ಮಂಜುಳ, ಎಂ.ರಾಮಯ್ಯ (ರಾಮು) ಶ್ರೀಮತಿ ನಿರ್ಮಲ ಹಾಗೂ ಜಿ.ಸುರೇಶ್ ನಿರ್ಮಿಸುತ್ತಿರುವ ಕೋಟೆ ಹೈದ ಚಿತ್ರಕ್ಕೆ ಕಳೆದ ವಾರ ಶ್ರೀ ಚಾಮುಂಡೇಶ್ವರ ಸ್ಟುಡಿಯೋದಲ್ಲಿ ಡಾ: ವಿ.ನಾಗೇಂದ್ರ ಪ್ರಸಾದ್ ರಚಿಸಿದ ಕೋಟೆ ಹೈದ ನಮ್ಮೂರ ರಾಜ, ಕೋಟೆ ಹೈದ ನಮ್ಮೂರ ತೇಜ ಎಂಬ ಹಾಡಿನೊಂದಿಗೆ ಒಟ್ಟು ಹಾಡುಗಳನ್ನು ಧ್ವನಿಮುದ್ರಿಸಿಕೊಳ್ಳಲಾಯಿತು. ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು ಉಳಿದ ೫ ಹಾಡುಗಳ ಚಿತ್ರೀಕರಣ ಆಗಷ್ಟ್ ತಿಂಗಳ ಮೊದಲ ವಾರದಿಂದ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.
ಎ.ಎಸ್.ರತ್ನಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಶ್ಯಾಮ್ ಸಿಂಧನೂರು ಛಾಯಾಗ್ರಹಣ, ಧನಶೀಲನ್ ಸಂಗೀತ, ಸೂರ್ಯಕಾಂತ್ (ಎಸ್.ಮಂಜು) ಕಥೆ, ಚಿತ್ರಕಥೆ, ಸಂಭಾಷಣೆ, ಕೌರವ ವೆಂಕಟೇಶ್ ಸಾಹಸ, ಅಂಜಿರೆಡ್ಡಿ ಸಂಕಲನ, ಡಾ: ವಿ.ನಾಗೇಂದ್ರ ಪ್ರಸಾದ್, ಎಂ.ರಾಮಯ್ಯ (ರಾಮು), ಸೂರ್ಯಕಾಂತ್ ಸಾಹಿತ್ಯ, ಬಿ.ಜಿ.ರಮೇಶ್ ನಿರ್ಮಾಣ ನಿರ್ವಹಣೆ ಇದೆ. ಕೃಷ್ಣೋಜಿರಾವ್ ಸಹನಿರ್ದೇಶನವಿದೆ. ಸೂರ್ಯಕಾಂತ್, ನಾಗವರ್ಧನ್, ಶಿಲ್ಪಾ, ಸಂದ್ಯಾ, ಸಿತಾರಮ್ಮ, ವಿಕ್ಟರಿ ವಾಸು, ಹೊನ್ನವಳ್ಳಿ ಕೃಷ್ಣ ಬಿರಾದಾರ್ ಕುರಿಬಾಂಡ್ ರಂಗ, ಜಿ.ಸುರೇಶ್, ಎಂ.ರಾಮಯ್ಯ, ಎಂ.ವೆಂಕಟೇಶ್ ಎಸ್.ಸತೀಶ್ ಮುಂತಾದವರು ತಾರಾಗಣದಲ್ಲಿದ್ದಾರೆ.