`ಕೋಟೆ ಹೈದ` ನಿಗೆ ಐದು ಹಾಡುಗಳು
Posted date: 21 Tue, Jul 2015 – 10:27:49 AM

ಕೋಟೆ ಮಾರಮ್ಮ ಮೂವೀ ಮೇಕರ‍್ಸ್ ಲಾಂಛನದಲ್ಲಿ ಶ್ರೀಮತಿ.ಎನ್.ಮಂಜುಳ, ಎಂ.ರಾಮಯ್ಯ (ರಾಮು) ಶ್ರೀಮತಿ ನಿರ್ಮಲ ಹಾಗೂ ಜಿ.ಸುರೇಶ್ ನಿರ್ಮಿಸುತ್ತಿರುವ ಕೋಟೆ ಹೈದ ಚಿತ್ರಕ್ಕೆ ಕಳೆದ ವಾರ ಶ್ರೀ ಚಾಮುಂಡೇಶ್ವರ ಸ್ಟುಡಿಯೋದಲ್ಲಿ ಡಾ: ವಿ.ನಾಗೇಂದ್ರ ಪ್ರಸಾದ್ ರಚಿಸಿದ ಕೋಟೆ ಹೈದ ನಮ್ಮೂರ ರಾಜ, ಕೋಟೆ ಹೈದ ನಮ್ಮೂರ ತೇಜ ಎಂಬ ಹಾಡಿನೊಂದಿಗೆ ಒಟ್ಟು ಹಾಡುಗಳನ್ನು  ಧ್ವನಿಮುದ್ರಿಸಿಕೊಳ್ಳಲಾಯಿತು.  ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು ಉಳಿದ ೫ ಹಾಡುಗಳ ಚಿತ್ರೀಕರಣ ಆಗಷ್ಟ್ ತಿಂಗಳ ಮೊದಲ ವಾರದಿಂದ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

ಎ.ಎಸ್.ರತ್ನಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಶ್ಯಾಮ್ ಸಿಂಧನೂರು ಛಾಯಾಗ್ರಹಣ, ಧನಶೀಲನ್ ಸಂಗೀತ, ಸೂರ್ಯಕಾಂತ್ (ಎಸ್.ಮಂಜು) ಕಥೆ, ಚಿತ್ರಕಥೆ, ಸಂಭಾಷಣೆ, ಕೌರವ ವೆಂಕಟೇಶ್ ಸಾಹಸ, ಅಂಜಿರೆಡ್ಡಿ ಸಂಕಲನ, ಡಾ: ವಿ.ನಾಗೇಂದ್ರ ಪ್ರಸಾದ್, ಎಂ.ರಾಮಯ್ಯ (ರಾಮು), ಸೂರ್ಯಕಾಂತ್ ಸಾಹಿತ್ಯ, ಬಿ.ಜಿ.ರಮೇಶ್ ನಿರ್ಮಾಣ ನಿರ್ವಹಣೆ ಇದೆ. ಕೃಷ್ಣೋಜಿರಾವ್ ಸಹನಿರ್ದೇಶನವಿದೆ. ಸೂರ್ಯಕಾಂತ್, ನಾಗವರ್ಧನ್, ಶಿಲ್ಪಾ, ಸಂದ್ಯಾ, ಸಿತಾರಮ್ಮ, ವಿಕ್ಟರಿ ವಾಸು, ಹೊನ್ನವಳ್ಳಿ ಕೃಷ್ಣ ಬಿರಾದಾರ್ ಕುರಿಬಾಂಡ್ ರಂಗ, ಜಿ.ಸುರೇಶ್, ಎಂ.ರಾಮಯ್ಯ, ಎಂ.ವೆಂಕಟೇಶ್ ಎಸ್.ಸತೀಶ್ ಮುಂತಾದವರು ತಾರಾಗಣದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed